ನನ್ನ ನೆಚ್ಚಿನ ಹಾಡು ಇದು. ಕೇಳಿದಂತೆಲ್ಲ ಕೇಳಬೇಕೆನಿಸುತ್ತದೆ. ನನ್ನ ಹಾಗು ನನ್ನ ಕೆಲಸಗಳನ್ನು ಯಾರಾದರು ಹುಚ್ಚುತನಕ್ಕೆ ಹೋಲಿಸಿದರೆ ಆಗ ನಾನವರ ಮುಂದೆ ಈ ಹಾಡನ್ನು ಹೇಳುತ್ತೇನೆ. ( ನನ್ನ ಒಲವಿನ ಗೆಳತಿ, ಅವಳ ಮೇಲಿನ ನನ್ನ ಒಲವನ್ನು ಬಿಸಿಲಗುದುರೆಗೆ ಓಲಿಸಿದಾಗ, ಅವಳು ನಾನು ನಿನಗೆ ಸಿಗುವುದಿಲ್ಲ..! ಯಾಕೆ ನನ್ನ ಬಗ್ಗೆ ಇಟೊಂದು ಕನಸು ಕಾಣ್ತಿಯ..? ಎಂದು ಕೇಳಿದಾಗಲೆಲ್ಲ ಅವಳಿಗೆ ನಾ ಹೇಳುವ ಹಾಡು ಇದು) ನನ್ನ ತಿಳುವಳಿಕೆಯನ್ನು ನೂರಾರು ದಿಕ್ಕಿಗೆ ಕೊಂಡೊಯ್ಯುವ ಹಾಡಿದು. ನೀವು ಕೇಳಿದರೆ ನಿಮಗೂ ಚಂದ, ಇಂಪು ಅನಿಸ ಬಹುದೇನೋ. ಆಗಲೇ ನೀವು ಕೇಳಿರಬಹುದು.....! ಆದರೂ ನಿಮ್ಮಲ್ಲಿ ಹಂಚಿಕೊಳ್ಳುವ ಹಂಬಲದಿಂದ ಇದನ್ನು ಇಲ್ಲಿ ಬರೆದಿರುವೆ. ಇಂತಹ ಸೊಗಸಾದ ಹಾಡನ್ನು ಬರೆದ ಶಿವರುದ್ರಪ್ಪನರವರಿಗೆ ನನ್ನಿ.
ಹಾಗು ಇಂಪಾಗಿ ಎದೆ ತುಂಬಿ ಹಾಡಿರುವ ಅಶ್ವತ್ ರವರಿಗೂ ನನ್ನಿ. ಜೊತೆಗೆ ನಿಮ್ಮೆಲ್ಲರಿಗೂ.............!
ಕಾಣದ ಕಡಲಿಗೆ ಹಂಬಲಿಸಿದೇ ಮನ
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ?
ಕಾಣದ ಕಡಲಿದ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೇ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು
ಎಂತಿರುವುದೋ ಅದು
ನೋಡಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ?
ಸಾವಿರ ಹೊಳೆಗಳು ತುಂಬಿ ಹರಿದರು
ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ
ಅಪಾರವಂತೆ
ಕಾಣಬಲ್ಲೆನೆ ಒಂದು ದಿನ
ಅದರೊಳು ಕರಗಲಾರನೆ ಒಂದು ದಿನ?
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲಿಗೆ
ಸೇರಬಲ್ಲೆನೇನು
ಕಡಲೊಡಲಿನ ಆ ರತ್ನ ಗರ್ಭದಲಿ
ಮುಳುಗಬಹುದೆ ನಾನು
ಕಡಲ ನೀಲಿಯಲಿ
ಕರಗಬಹುದೆ ನಾನು
ಕಬ್ಬಿಗ/ನೆಗಳ್ಚು : ಜಿ ಎಸ್ ಶಿವರುದ್ರಪ್ಪ
ಕಬ್ಬಸಿವುಡಿ : ಚೆಲುವು- ಒಲವು
ಹಾಡಿದವರು: ಅಶ್ವತ್
sunaath said...
September 15, 2008 at 2:16 AM
sunaath said...
ಕುಮಾರಸ್ವಾಮಿಯವರೆ,
ಶಿವರುದ್ರಪ್ಪನವರ ಸುಂದರವಾದ ಕವನಕ್ಕಾಗಿ ಧನ್ಯವಾದಗಳು.
September 15, 2008 at 2:19 AM